Villages Reunion: ಹೊನಗನಹಳ್ಳಿ, ಸವನಳ್ಳಿ ಗ್ರಾಮಗಳನ್ನು ವಿಜಯಪುರ ತಾಲೂಕಿಗೆ ಮರುಸೇರ್ಪಡೆ ಮಾಡಿ ಸರಕಾರದಿಂದ ಅಂತಿಮ ಆದೇಶ- ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ-ಸವನಳ್ಳಿ(Honaganahalli Savanalli) ಗ್ರಾಮಗಳನ್ನು(Villages) ವಿಜಯಪುರ ತಾಲೂಕಿಗೆ ಮರುಸೇರ್ಪಡೆ(Reunion) ಮಾಡಿ ರಾಜ್ಯ ಸರಕಾರ ಅಂತಿಮ ಆದೇಶ ಹೊರಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ(MLA M B Patil) ತಿಳಿಸಿದ್ದಾರೆ. ಬೆಂಗಳೂರಿನಿಂದ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ನೂತನ ತಾಲೂಕು ರಚನೆಯಾದ ನಂತರ ವಿಜಯಪುರ ತಾಲೂಕಿನಲ್ಲಿದ್ದ ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲೂಕಿಗೆ ಸೇರ್ಪಡೆ […]

ರಾಜ್ಯ ಸರಕಾರಿ ನೌಕರರಿಗೆ ತುಟ್ಟಿಭತ್ಯೆ ಶೇ. 2.75 ರಷ್ಟು ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ ಆದೇಶ

ಬೆಂಗಳೂರು: ರಾಜ್ಯ(State) ಸರಕಾರಿ(Government) ನೌಕರರಿಗೆ(Employees) ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ(Dearness) ಭತ್ಯೆಯನ್ನು(Allowance) ಶೇ. 2.75 ರಷ್ಟು ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ. ಇದಕ್ಕಾಗಿ ಸರಕಾರ ರೂ. 1447 ಕೋ. ವಾರ್ಷಿಕ ವೆಚ್ಚ ಭರಿಸಲಿದೆ.  ಈ ಸಂಬಂಧ ಸರಕಾರಿ ಆದೇಶ ಹೊರಡಿಸಲಾಗಿದೆ.