ಮಕ್ಕಳ ಏರಲಿಫ್ಟ್ ವಿಳಂಬ ಆರೋಪ- ಬಸವ ನಾಡಿನಲ್ಲಿ ಪೋಷಕರ ಆಕ್ರೋಶ- ಕೇಂದ್ರ ಸಚಿವರು ಸಂಸದರ ವಿರುದ್ಧ ವಾಗ್ದಾಳಿ

ವಿಜಯಪುರ: ಉಕ್ರೇನಿನ(Ukrain) ಮೇಲೆ ರಷ್ಯಾ(Russia) ಯುದ್ಧ ಸಾರಿದ್ದು(War Declared), ಭಾರತ, ಕರ್ನಾಟಕ (India, Karnataka) ಮತ್ತು ವಿಜಯಪುರದ ಅನೇಕ ಜನ ವಿದ್ಯಾರ್ಥಿಗಳು ಇನ್ನೂ ಖಾರ್ಕಿವ್ ನಲ್ಲಿಯೇ(Kharkiv) ಸಿಲುಕಿಕೊಂಡಿದ್ದಾರೆ.  ದಿನೇ ದಿನೇ ರಷ್ಯಾ ಧಾಳಿ(Attack) ತೀವ್ರಗೊಂಡಿದ್ದು, ಅಲ್ಲಿರುವ ವಿದ್ಯಾರ್ಥಿಗಳ ಆತಂಕವೂ(Students Tense) ಹೆಚ್ಚಾಗಿದೆ.  ಇದು ವಿದ್ಯಾರ್ಥಿಗಳ ಪೋಷಕರಲ್ಲಿ ದುಗುಡು ಹೆಚ್ಚಾಗುವಂತೆ ಮಾಡಿದೆ.  ಕೇಂದ್ರ ಸರಕಾರ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರ ಏರಲಿಫ್ಟ್ ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ, ಪೂರ್ವ ಉಕ್ರೇನಿನಲ್ಲಿ ಸಿಲುಕಿರುವವರ ಬಗ್ಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಾರ್ಹವಾಗಿದೆ.  […]