PSI Siddharamaiah Yatnal: ಪಿಎಸ್ಐ ನೇಮಕಾತಿ ಹಗರಣ ಮುಚ್ಚಿಹಾಕಲು ಪ್ರಯತ್ನ ನಡೆದಿದೆ- ಸಿದ್ಧರಾಮಯ್ಯ ಪೇಟಾ ಸುತ್ತಿಕೊಂಡು ಭಂಡಾರ ಹಚ್ಚಿಕೊಳ್ಳಲಿ- ಯತ್ನಾಳ

ವಿಜಯಪುರ: ಪ್ರಭಾವಿಗಳು ಶಾಮೀಲಾಗಿರುವುದರಿಂದ ಪಿಎಸ್‌ಐ ನೇಮಕಾತಿ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವjರು, ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ.  ಈ ಮುಂಚೆಯೇ ನಾನು ಈ ಬಗ್ಗೆ ಹೇಳಿದ್ದೇನೆ.  ನ್ಯಾಯಾಧೀಶರು ಸ್ಚ್ರಾಂಗ್ ಇದ್ದಾರೆಂಬ ಕಾರಣಕ್ಕೆ ಇಷ್ಟೇಲ್ಲ ಬಹಿರಂಗವಾಗಿದೆ.  ಈಗ ಬಂಧಿಸಲಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಪಾಲ್ ಮಾತ್ರ ಈ ಹಗರಣದಲ್ಲಿ ಭಾಗಿಯಾಗಿಲ್ಲ.  ಇದರಲ್ಲಿ ಬಹಳಷ್ಟು […]