ಗುಮ್ಮಟ ನಗರಿಯ ರಸ್ತೆಗಳಿಗೆ ಆದಿಲಶಾಹಿ ಬಾದಷಹರು, ಸೂಫಿ ಸಂತರು, ಇತರ ಮಹನೀಯರ ಹೆಸರಿಡಲು ದಿ ಬಿಜಾಪುರ ಹೆರಿಟೇಜ್ ಫೌಂಡೇಶನ್ ಆಗ್ರಹ

ವಿಜಯಪುರ: ವಿಜಯಪುರ ನಗರದ ಕೆಲವು ಮಾರ್ಗ ಮತ್ತು ವೃತ್ತಗಳಿಗೆ ಆದಿಲ್‍ಶಾಹಿ ದೊರೆಗಳ, ಸೂಫಿ ಸಂತರ ಹಾಗೂ ಇತರೆ ಮಹನೀಯರ ನಾಮಕರ ಮಾಡಬೇಕು ಎಂದು ಒತ್ತಾಯಿಸಿ ದಿ ಬಿಜಾಪುರ ಹೆರಿಟೇಜ್ ಪೌಂಡೇಶನ್ ವತಿಯಿಂದ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಫೌಂಜೇಶನ್ ಸಂಸ್ಥಾಪಕ ಅನೀಸ ಮನೀಯಾರ ಮತ್ತು ಹಮ್ಜಾ ಮಹಿಬೂಬ, ವಿಜಯಪುರ ನಗರವು ಜಗತ್ತಿನ ಇತಿಹಾಸದಲ್ಲಿ ಪ್ರಾಮುಖ್ಯತೆ ಪಡೆದಿದೆ.  ಇಲ್ಲಿ ಅನೇಕ ಮಹಾ ಪುರುಷರು, ಸಮಾಜ ಸುಧಾರಕರು ಹಾಗೂ ಐತಿಹಾಸಿಕ ವ್ಯಕ್ತಿಗಳು […]