ಎಂ ಎಲ್ ಸಿ ಅರುಣ ಶಹಾಪುರ ಅವರಿಗೆ ಪತ್ರ ಬರೆದ ಶಿಕ್ಷಣ ಸಚಿವರು- ಲೆಟರ್ ನಲ್ಲಿ ಏನಿದೆ ಗೊತ್ತಾ?

ವಿಜಯಪುರ: ಶಿಕ್ಷಣ(Education) ಸಚಿವ(Minister) ಬಿ. ಸಿ. ನಾಗೇಶ(B C Nagesh) ವಿಧಾನ ಪರಿಷತ ಶಿಕ್ಷಕರ ಕ್ಷೇತ್ರದ ಶಾಸಕ(MLC) ಅರುಣ ಶಹಾಪುರ(Arun Shahapur) ಅವರಿಗೆ ಪತ್ರ ಬರೆದಿದ್ದಾರೆ.  ಈ ಪತ್ರದಲ್ಲಿ ನಾನಾ ವಿಚಾರಗಳನ್ನು ಶಿಕ್ಷಣ ಸಚಿವರು ಪ್ರಸ್ತಾಪಿಸಿದ್ದು, ಕೋರಿಕೆಯನ್ನು ಸಲ್ಲಿಸಿದ್ದಾರೆ. ಸಚಿವರ ಪತ್ರದಲ್ಲಿರುವದ ಸಂಪೂರ್ಣ ಸಾರ ಇಲ್ಲಿದೆ. ಆದರಣೀಯ ಜನಪ್ರಿಯ ಶಾಸಕರಾದ ಶ್ರೀ ಅರುಣ್‌ ಶಹಾಪುರ ಅವರೇ.. ಕೋವಿಡ್-19 ಕಾರಣ ಕಳೆದ ಎರಡು ವರ್ಷಗಳಿಂದ ವಿದ್ಯಾರ್ಥಿಗಳು ಶಾಲೆಗೆ ಸರಿಯಾಗಿ ಹಾಜರಾಗಲು ಸಾಧ್ಯವಾಗದೇ ಕಲಿಕೆಯಲ್ಲಿ ಹಿನ್ನಡೆಯಾಗಿರುವುದು ತಮಗೆ ತಿಳಿದ ಸಂಗತಿಯಾಗಿದೆ. […]