PSI Siddharamaiah Yatnal: ಪಿಎಸ್ಐ ನೇಮಕಾತಿ ಹಗರಣ ಮುಚ್ಚಿಹಾಕಲು ಪ್ರಯತ್ನ ನಡೆದಿದೆ- ಸಿದ್ಧರಾಮಯ್ಯ ಪೇಟಾ ಸುತ್ತಿಕೊಂಡು ಭಂಡಾರ ಹಚ್ಚಿಕೊಳ್ಳಲಿ- ಯತ್ನಾಳ

ವಿಜಯಪುರ: ಪ್ರಭಾವಿಗಳು ಶಾಮೀಲಾಗಿರುವುದರಿಂದ ಪಿಎಸ್‌ಐ ನೇಮಕಾತಿ ಹಗರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗಂಭೀರ ಆರೋಪ ಮಾಡಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವjರು, ಪಿಎಸ್‌ಐ ನೇಮಕಾತಿ ಹಗರಣ ಮುಚ್ಚಿಹಾಕಲು ಪ್ರಯತ್ನ ನಡೆಯುತ್ತಿದೆ.  ಈ ಮುಂಚೆಯೇ ನಾನು ಈ ಬಗ್ಗೆ ಹೇಳಿದ್ದೇನೆ.  ನ್ಯಾಯಾಧೀಶರು ಸ್ಚ್ರಾಂಗ್ ಇದ್ದಾರೆಂಬ ಕಾರಣಕ್ಕೆ ಇಷ್ಟೇಲ್ಲ ಬಹಿರಂಗವಾಗಿದೆ.  ಈಗ ಬಂಧಿಸಲಾಗಿರುವ ಹಿರಿಯ ಪೊಲೀಸ್ ಅಧಿಕಾರಿ ಪಾಲ್ ಮಾತ್ರ ಈ ಹಗರಣದಲ್ಲಿ ಭಾಗಿಯಾಗಿಲ್ಲ.  ಇದರಲ್ಲಿ ಬಹಳಷ್ಟು […]

Green Village: ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಿದವರ ಸ್ವಾಗತಕ್ಕೆ ಸಜ್ಜಾಗಿದೆ ಸಂಗಾಪುರ ಎಸ್. ಎಚ್.- ಅಚ್ಚರಿ ಎನಿಸುವಂತಿದೆ ಈ ಗ್ರಾಮದ ಅಭಿವೃದ್ಧಿ

ಮಹೇಶ ವಿ. ಶಟಗಾರ ವಿಜಯಪುರ, 01- ಬರದ ನಾಡನ್ನು ಹಸಿರು ಬೀಡನ್ನಾಗಿ ಮಾಡಲು ಕಾರಣರಾದ ನಾಯಕರನ್ನು ಆಹ್ವಾನಿಸಿ ಗೌರವಿಸಲು ಸಂಗಾಪುರ ಎಸ್. ಎಚ್. ಗ್ರಾಮಸ್ಥರು ಸಜ್ಜಾಗಿದ್ದಾರೆ.  ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ, ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ 25ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. […]