Temples Grant: ಸಚಿವ ಕಾರಜೋಳ ಮನವಿಗೆ ಸಿಎಂ ಸ್ಪಂದನೆ- ನಾಗಠಾಣ, ವಿಜಯಪುರ ತಾಲೂಕಿನ ದೇವಸ್ಥಾನಗಳ ಅಭಿವೃದ್ಧಿಗೆ ₹2 ಕೋ. ಬಿಡುಗಡೆ- ಉಮೇಶ ಕಾರಜೋಳ

ವಿಜಯಪುರ: ನಾಗಠಾಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಚಡಚಣ ಹಾಗೂ ವಿಜಯಪುರ ತಾಲೂಕಿನ ನಾನಾ ದೇವಾಲಯಗಳ ಅಭಿವೃದ್ಧಿಗೆ ರೂ. 2 ಕೋ. ಅನುದಾನ ಬಿಡುಗಡೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾಡಿದ ಮನವಿಗೆ ಸಿಎಂ‌ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಉಮೇಶ ಕಾರಜೋಳ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಚಿವರ ಮನವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಂದಿಸಿ ರೂ. 2 ಕೋ. ಹಣ ಬಿಡುಗಡೆ ಮಾಡಿದ್ದಾರೆ. ಈ ಎಲ್ಲ ದೇವಾಲಯಗಳಿಗೆ ಆರ್ಥಿಕ ಇಲಾಖೆಯು […]