Ganiga Guruvandane: ವನಶ್ರೀ ಸಂಸ್ಥಾನ ಮಠದಲ್ಲಿ ಮೇ 17ರಂದು ಗುರುವಂದನೆ ಕಾರ್ಯಕ್ರಮ

ವಿಜಯಪುರ: ಗಾಣಿಗ(Ganiga) ಗುರುಪೀಠದ(Gurupeetg) ಜಗದ್ಗುರು ಡಾ. ಜಯಬಸವ ಕುಮಾರ ಸ್ವಾಮೀಜಿ(Dr Jayabasava Kumar Swamiji) ಅವರ 43ನೇ ಗುರುವಂದನೆ(Guruvandane) ಕಾರ್ಯಕ್ರಮ ವಿಜಯಪುರ ನಗರದ ವನಶ್ರೀ ಸಂಸ್ಥಾನಮಠ(Vanashree Samstgananath) ಮೇ 17 ರಂದು ನಡೆಯಲಿದೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಶರಣಬಸಪ್ಪ ಅರಕೇರಿ ಮಂಗಳವಾರ ಶ್ರೀ ಮಠದಲ್ಲಿ ಬೆ. 11ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಗುರುವಂದನೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಎಲ್ಲ ಸಮಾಜಗಳ ಧರ್ಮಗುರುಗಳು, ಮಠಾಧೀಶರನ್ನು ಆಮಂತ್ರಿಸಲಾಗಿದೆ. […]