ಸಿಂದಗಿಯಲ್ಲಿ ಕಾರ್ಮಿಕ ಇಲಾಖೆಯಿಂದ ದಿಢೀರ್ ದಾಳಿ- ಇಬ್ಬರು ಬಾಲ ಕಾರ್ಮಿಕರ ರಕ್ಷಣೆ

ವಿಜಯಪುರ: ವಿಜಯಪುರ(Vijayapura) ಜಿಲ್ಲೆಯ ಸಿಂದಗಿ(Sindagi) ತಾಲೂಕಿನಲ್ಲಿ ಕಾರ್ಮಿಕ(Labour) ಇಲಾಖೆ(Department) ಅಧಿಕಾರಿಗಳು ದಿಢೀರ್(Raid) ಧಾಳಿ ನಡೆಸಿ ಇಬ್ಬರು ಕಿಶೋರ ಕಾರ್ಮಿಕರನ್ನು(ಬಾಲ ಕಾರ್ಮಿಕರು)(Children) ರಕ್ಷಿಸಿದ್ದಾರೆ.  ಈ ಸಂದರ್ಭದಲ್ಲಿ ಬಾಲ ಕಾರ್ಮಿಕ ಪದ್ಧತಿಯ ಬಗ್ಗೆ ಜನರಲ್ಲಿ ಅಧಿಕಾರಿಗಳು ಜಾಗೃತಿ ಮೂಡಿಸಿದರು..  ಬಳಿಕ ಮಾತನಾಡಿದ ಸಿಂದಗಿ ವೃತ್ತದ ಲೇಬರ್ ಇನ್ಸಪೆಕ್ಟರ್ ಜಗದೇವಿ ಸಜ್ಜನ, ಬಾಲ ಕಾರ್ಮಿಕ ಪದ್ದತಿಯು ಅನಿಷ್ಠ ಪದ್ದತಿಗಳಲ್ಲೊಂದಾಗಿದೆ.  ಇದರ ನಿರ್ಮೂಲನೆಗೆ ಕೇವಲ ಒಬ್ಬ ವ್ಯಕ್ತಿ ಅಥವಾ ಇಲಾಖೆ ಶ್ರಮಿಸಿದರೆ ಸಾಲದು.  ಸಾರ್ವಜನಿಕರ ಹಾಗೂ ನಾನಾ ಇಲಾಖೆಗಳು ಕೈಜೋಡಿಸಬೇಕು ಎಂದು ಹೇಳಿದರು. […]