ವಿಶ್ವವಿದ್ಯಾಲಯ ಮಾತ್ರವಲ್ಲ ಖಾರ್ಕಿವ್ ನಲ್ಲಿ ಎಲ್ಲ ನಾಶವಾಗಿದೆ- ಮನೆಗೆ ಬಂದ ಸಂತಸದ ಮಧ್ಯೆಯೂ ಯುದ್ಧದ ಭೀಕರತೆ ಬಿಚ್ಚಿಟ್ಟ ವಿದ್ಯಾರ್ಥಿನಿ

ಮಹೇಶ ವಿ. ಶಟಗಾರ ವಿಜಯಪುರ: ಮಗಳು(Daughter) ಮನೆಗೆ ಬಂದಿದ್ದೆ ತಡ ಬಿಗಿದಪ್ಪಿಕೊಂಡ ಪೋಷಕರು(Parents Hugged) ಮುದ್ದಾಡಿ ದೇವರಿಗೆ ಧನ್ಯವಾದ(Thanked God) ತಿಳಿಸಿದರು.  ತಮ್ಮ ಮಗಳು ಸುರಕ್ಷಿತವಾಗಿ(Safely) ಬಂದಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ(Prime Minister Narendra Modi), ನಗರದ ನಾನಾ ಸಮುದಾಯದ(Various Community) ಜನರ ಪ್ರಾರ್ಥನೆಗಳು(Prayers) ಕಾರಣ ಎಂದು ಭಾವುಕರಾದರು. ಇದು ಯುದ್ಧ ಪೀಡಿತ ಉಕ್ರೇನಿನಲ್ಲಿ ಬಂಕರಿನಲ್ಲಿ ಐದು ದಿನ ಆತಂಕದಲ್ಲಿಯೇ ಕಳೆದು ಅಂತೂ ಇಂತೂ ರೈಲು ಹಿಡಿದು ಪೋಲಂಡ ತಲುಪಿ ಸುರಕ್ಷಿತವಾಗಿ ಬಸವ ನಾಡು ತಲುಪಿದ ವೈದ್ಯಕೀಯ […]

ಉಕ್ರೇನಿನಿಂದ ಸುರಕ್ಷಿತವಾಗಿ ಬಸವ ನಾಡು ತಲುಪಿದ ವಿವಿಧಾ ಮಲ್ಲಿಕಾರ್ಜುನಮಠ ಗೆ ನಾಗರಿಕರಿಂದ ಸನ್ಮಾನ

ವಿಜಯಪುರ: ಉಕ್ರೇನ್ ಯುದ್ಧ ಪೀಡಿತ ಪ್ರದೇಶದಲ್ಲಿ ಸಿಲುಕಿ ಅತಂತ್ರರಾಗಿದ್ದ ವಿದ್ಯಾರ್ಥಿಗಳಲ್ಲಿ ಓರ್ವರಾದ ವಿಜಯಪುರ ನಗರದ ವಿವಿಧಾ ಮಲ್ಲಿಕಾರ್ಜುನಮಠ ಈಗ ಸುರಕ್ಷಿತವಾಗಿ ತವರು ಜಿಲ್ಲೆ  ತಲುಪಿದ್ದಾರೆ. ವಿಜಯಪುರ ನಗರದ ಹೊರ ವಲಯದಲ್ಲಿರುವ ಹುಂಡೈ ಶೋರೂಂ ಬಳಿ ವಿವಿಧಾ ಮಲ್ಲಿಕಾರ್ಜುನಮಠ ತನ್ನ ತಾಯಿ ಭುವನೇಶ್ವರಿ ಮಲ್ಲಿಕಾರ್ಜುನಮಠ, ತಂದೆ ಮತ್ತು ಪತ್ರಕರ್ತ ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ತಮ್ಮ ಜೈವಿಹಾನ ಮಲ್ಲಿಕಾರ್ಜುನಮಠ ಜೊತೆ ಆಗಮಿಸಿದಾಗ ಅಲ್ಲಿದ್ದ ಸ್ನೇಹಿತರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಾದ ಸೋಮು ಸೂಳಿಭಾವಿ, ಸ್ನೇಹಿತರಾದ ಸಂಪತ ಕೋವಳ್ಳಿ, ಬಿಜೆಪಿ ಮಾಧ್ಯಮ ಪ್ರಮುಖ […]

ಉಕ್ರೇನಿನಿಂದ ಮನೆಗೆ ಬಂದ ಮಗಳನ್ನು ಸಿಹಿ ತಿನ್ನಿಸಿ ಬರಮಾಡಿಕೊಂಡ ಪೋಷಕರು

ವಿಜಯಪುರ: ರಷ್ಯಾ ಯುದ್ಧ(Russia Invasion) ಸಾರಿರುವ ಉಕ್ರೇನಿನಲ್ಲಿ ಅತಂತ್ರಳಾಗಿದ್ದ(Stranded in Ukraine) ಬಸವ ನಾಡು(Basava Nadu) ವಿಜಯಪುರ(Vijayapura) ಜಿಲ್ಲೆಯ ಮತ್ತೋರ್ವ ವಿದ್ಯಾರ್ಥಿನಿ(Student) ಸುರಕ್ಷಿತವಾಗಿ ಮನೆ(Reached Home ತಲುಪಿದ್ದಾಳೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ತಮದಡ್ಡಿ ಗ್ರಾಮದ ಸುಚಿತ್ರಾ ಮಲ್ಲನಗೌಡ ಕವಡಿಮಟ್ಟಿ ಸುರಕ್ಷಿತವಾಗಿ ಮನೆಗೆ ತಲುಪಿದ ಯುವತಿಯಾಗಿದ್ದಾಳೆ.  ಉಕ್ರೇನಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದ ಯುವತಿ ಯುದ್ಧ ರಷ್ಯಾ ಉಕ್ರೇನಿನ ಮೇಲೆ ಯುದ್ಧ ಸಾರಿದಾಗಿನಿಂದ ಇತರ ವಿದ್ಯಾರ್ಥಿಗಳೊಂದಿಗೆ ಅಲ್ಲಿಯೇ ಅತಂತ್ರಳಾಗಿದ್ದಳು.  ನಂತರ ಪೋಲಂಡ ತಲುಪಿ ಅಲ್ಲಿಂದ ದೆಹಲಿ […]

ಉಕ್ರೇನಿನಿಂದ ಬೆಂಗಳೂರಿಗೆ ಬಂದ ಬಸವ ನಾಡಿನ ವಿವಿಧಾ ಮಲ್ಲಿಕಾರ್ಜುನಮಠ

ಬೆಂಗಳೂರು: ಯುದ್ಧ ಪೀಡಿತ ಉಕ್ರೇನಿನಲ್ಲಿ ಸಿಲುಕಿದ್ದ ಬಸವ ನಾಡು ವಿಜಯಪುರದ ವಿದ್ಯಾರ್ಥಿನಿ ವಿವಿಧಾ ಮಲ್ಲಿಕಾರ್ಜುನಮಠ ಬೆಂಗಳೂರು ತಲುಪಿದ್ದಾರೆ. ಯುದ್ಧ ಪೀಡಿತ ಪೂರ್ವ ಉಕ್ರೇನಿನ ಖಾರ್ಕಿವನಲ್ಲಿ ಬಂಕರ್ ನಲ್ಲಿ ರಕ್ಷಣೆ ಪಡೆದಿದ್ದ ವಿವಿಧಾ ಮಲ್ಲಿಕಾರ್ಜುನಮಠ ಪೊಲಂಡ ಮೂಲಕ ರವಿವಾರ ನವದೆಹಲಿಗೆ ಆಗಮಿಸಿದ್ದರು. ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ ವಿವಿಧಾ ಮಲ್ಲಿಕಾರ್ಜುನಮಠ ಅವರನ್ನು ತಂದೆ ಅಲ್ಲನಪ್ರಭು ಮಲ್ಲಿಕಾರ್ಜುನಮಠ, ತಾಯಿ ಭುವನೇಶ್ವರಿ, ತಮ್ಮ ಜೈವಿಹಾನ, ಸೋದರ ಮಾವ ಬಸವರಾಜ ಮೇಲಿನಮಠ ಮುಂತಾದವರು ಸ್ವಾಗತಿಸಿ ಬರಮಾಡಿಕೊಂಡರು. ಮಗಳ ಸುರಕ್ಷಿತವಾಗಿ ತಾಯ್ನಾಡಿಗೆ ಆಗಮನದಿಂದ ತಾಯಿ ಭುವನೇಶ್ವರಿ […]

ಮಕ್ಕಳ ಏರಲಿಫ್ಟ್ ವಿಳಂಬ ಆರೋಪ- ಬಸವ ನಾಡಿನಲ್ಲಿ ಪೋಷಕರ ಆಕ್ರೋಶ- ಕೇಂದ್ರ ಸಚಿವರು ಸಂಸದರ ವಿರುದ್ಧ ವಾಗ್ದಾಳಿ

ವಿಜಯಪುರ: ಉಕ್ರೇನಿನ(Ukrain) ಮೇಲೆ ರಷ್ಯಾ(Russia) ಯುದ್ಧ ಸಾರಿದ್ದು(War Declared), ಭಾರತ, ಕರ್ನಾಟಕ (India, Karnataka) ಮತ್ತು ವಿಜಯಪುರದ ಅನೇಕ ಜನ ವಿದ್ಯಾರ್ಥಿಗಳು ಇನ್ನೂ ಖಾರ್ಕಿವ್ ನಲ್ಲಿಯೇ(Kharkiv) ಸಿಲುಕಿಕೊಂಡಿದ್ದಾರೆ.  ದಿನೇ ದಿನೇ ರಷ್ಯಾ ಧಾಳಿ(Attack) ತೀವ್ರಗೊಂಡಿದ್ದು, ಅಲ್ಲಿರುವ ವಿದ್ಯಾರ್ಥಿಗಳ ಆತಂಕವೂ(Students Tense) ಹೆಚ್ಚಾಗಿದೆ.  ಇದು ವಿದ್ಯಾರ್ಥಿಗಳ ಪೋಷಕರಲ್ಲಿ ದುಗುಡು ಹೆಚ್ಚಾಗುವಂತೆ ಮಾಡಿದೆ.  ಕೇಂದ್ರ ಸರಕಾರ ಉಕ್ರೇನಿನಲ್ಲಿ ಸಿಲುಕಿರುವ ಭಾರತೀಯರ ಏರಲಿಫ್ಟ್ ಗೆ ಸಾಕಷ್ಟು ಪ್ರಯತ್ನ ಮಾಡುತ್ತಿದ್ದರೂ, ಪೂರ್ವ ಉಕ್ರೇನಿನಲ್ಲಿ ಸಿಲುಕಿರುವವರ ಬಗ್ಗೆ ಸಮರ್ಪಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಗಮನಾರ್ಹವಾಗಿದೆ.  […]