Jarakiholi Yatnal: ಸವಾಲು ಹಾಕಿದ್ದಕ್ಕೆ ಗೋಕಾಕಿಗೆ ಹೋಗಿ ಉತ್ತರ ನೀಡಿದ್ದೇನೆ- ತಿಂಡಿ ಇದ್ದವರು ವಿಜಯಪುರದಿಂದ ಸ್ಪರ್ಧಿಸಲಿ- ಶಾಸಕ ಯತ್ನಾಳ

ವಿಜಯಪುರ: ಸತೀಶ ಜಾರಕಿಹೊಳಿ ಅವರಿಗೆ ಅಂತ್ಯಕಾಲ ಬಂದಿದೆ.  ಹೀಗಾಗಿ ಅವರು ಈ ರೀತಿ ವರ್ತಿಸುತ್ತಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋಕಾಕ ಒಂದು ರೀತಿ ಬಿಹಾರ ರಾಜ್ಯದಂತಾಗಿತ್ತು.  ನನಗೆ ನೀ ಗೋಕಾಕಕ್ಕೆ ಹೆಂಗ ಬರ್ತಿ ಎಂದು ಸವಾಲು ಹಾಕಿದ್ದರು.  ಸತೀಶ ಜಾರಕಿಹೊಳಿ ಅವರ ಊರಿನಲ್ಲಿ ಯಾರೂ ಹೋಗುವುದಿಲ್ಲ.  ಅಲ್ಲಿಗೆ ಹೋಗಿ ಯಾರೂ ಭಾಷಣ ಮಾಡಲು ಸಾಧ್ಯವಿಲ್ಲ.  ಅಲ್ಲಿ ಯಾರಿಗೂ ಧಮ್ ಇಲ್ಲ.  […]